Friday, February 6, 2009

ಕೆಂಡ ಸಂಪಿಗೆಯಲ್ಲಿ ಸಮ್ಮೇಳನದ ಬಗ್ಗೆ ತರೀಕೆರೆ ಬರೆದಿದ್ದಾರೆ..

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ನಿಜ ಹೈಲೈಟ್ ಅಧ್ಯಕ್ಷ ಎಲ್. ಬಸವರಾಜು ಅವರ ಭಾಷಣ. ಅವರ ಭಾಷಣದ ಕಾರಣ ಚಿತ್ರದುರ್ಗದ ಸಮ್ಮೇಳನ ಇತಿಹಾಸ ಸೇರಿತು. ಇದುವರೆಗಿನ ಯಾವುದೇ ಸಾಹಿತಿ ಅಧ್ಯಕ್ಷ ಸ್ಥಾನದಿಂದ ಈ ನೆಲದ ದಲಿತರಿಗೆ ಉತ್ತಮ ಶಿಕ್ಷಣ ಕೊಡಿ ಎಂದು ಸರಕಾರವನ್ನು ಕೇಳಿರಲಿಲ್ಲ. ಅಂತೆಯೇ ಮಠಾಧೀಶರನ್ನು, ಬಂಡವಾಳ ಶಾಹಿಯನ್ನು ಕಳ್ಳ ಕಾಕರ ಜೊತೆ ಸಮೀಕರಿಸಿ ಮಾತನಾಡಿರಲಿಲ್ಲ. ಬಡವರಿಗೆ ಕೈಗೆಟುಕದೇ ಹೋಗಿರುವ ಶಿಕ್ಷಣವನ್ನು ಸರ್ಕಾರೀಕರಣ ಮಾಡಿ ಎಂದು ಬೊಬ್ಬೆ ಹಾಕಿರಲಿಲ್ಲ. ಆ ಕಾರಣಕ್ಕೆ ಇದು ವಿಶಿಷ್ಟ ಸಮ್ಮೇಳನ. ವಿಮರ್ಶಕ ರಹಮತ್ ತರೀಕೆರೆ ಕೆಂಡ ಸಂಪಿಗೆಯಲ್ಲಿರ ಬರೆದಿರುವ ಲೇಖನ ಓದಿ.

No comments: