Friday, March 21, 2008

ಒಂದು ಹಿಡಿ ಕ್ಷಮೆ ನಮಗಾಗಿ ಇಟ್ಟಿರಿ...

ಆಪ್ತರು ವಾಚಾಮಗೋಚರವಾಗಿ ಬೈದರು. ಆರಂಭ ಶೂರತ್ವ ಅಂತಾ ಅಣಕಿಸಿದರು. ಏನು ಮಾಡುವುದು ಸ್ವಾಮಿ. ಕೆಲಸದ ಒತ್ತಡ ಅಂದರೆ ನಂಬುವ ಮಾತೆ ಅಂತೀರಾ. ಯಾವುದೋ ತಾಂತ್ರಿಕ ತೊಂದರೆ ಅಂದರೆ ನಗುತ್ತೀರ. ಇರಲಿ. ನಿಜ ಹೇಳಬೇಕೆಂದರೆ ನಾವು ಮಾಡುತ್ತಿರುವ ಕೆಲಸಗಳ ನಡುವೆ ಏನನ್ನಾದರೂ ಬರೆಯಬೇಕು ಎನ್ನುವುದಕ್ಕೆ ಪ್ರಯತ್ನಿಸಿ ವಿಫಲರಾಗಿದ್ದೇವೆ. ಕೆಲಸದ ಒತ್ತಡ ಹಾಗಿತ್ತು. ಆದರೆ ನಿಮಗೆ ಹಿಸಿ ಹೋಳಿಗೆ ಬಡಿಸುವುದಕ್ಕೆ ಬೇಳೆ, ಬೆಲ್ಲ ಹೊಂಚು ಕೆಲಸವನ್ನಂತು ಕೈಬಿಟ್ಟಿಲ್ಲ. ಜಿಲ್ಲೆಯ ಮಿತ್ರರನ್ನು ಪರಿಚಯಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಜಿಲ್ಲೆಯ ಕಾವ್ಯ ಪರಂಪರೆ ಕುರಿತ ಒಳನೋಟದ ಲೇಖನವೊಂದು ನಿಮ್ಮ ಮುಂದೆ ಬರಲಿದೆ... ನಿರೀಕ್ಷೆಯಲ್ಲಿರಿ...
ಆದರೆ ಒಂದು ಮನವಿ.. ಇಂಥ ಗ್ಯಾಪ್ ಗಳು ಆಗಾಗ ಸೃಷ್ಟಿಯಾಗುತ್ತಿರುತ್ತವೆ. ಅದಕ್ಕಾಗಿ ಒಂದು ಹಿಡಿ ಕ್ಷಮೆ ನಮಗಾಗಿ ಎತ್ತಿಟ್ಟಿರಿ...
ದುರ್ಗದ ಹುಡುಗರು...

No comments: