Monday, July 28, 2008

ದೂರದ ಊರಿಂದ ಪತ್ರ ಬಂದಿದೆ...

(ದೂರದ ದಿಲ್ಲಿಯಲ್ಲಿ ಟೀವಿ ಪತ್ರಕರ್ತರಾಗಿರುವ ಶಿವಪ್ರಸಾದ್ ನಮ್ಮ ಜಿಲ್ಲೆಯಲ್ಲಿ ಈಗ ಸಮ್ಮೇಳನದ ಸಂಚಲನಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ಬರೆದಿರುವ ಪತ್ರವನ್ನು ನಿಮ್ಮ ಮುಂದೆ ಇಟ್ಟಿದ್ದೇವೆ..ಹಾಂ ಅವರು ಬರೆಯುತ್ತಿರುವ ಬ್ಲಾಗಿನಲ್ಲಿ ನಮ್ಮ ಬ್ಲಾಗಿನ ಪರಿಚಯ ಮಾಡಿಕೊಟ್ಟಿದ್ದಾರೆ. )
ಓವರ್ ಟು ಲೆಟರ್...

ದುರ್ಗದ ಹುಡುಗರಿಗೆ ಜೈ!ನಿಜಕ್ಕೂ ಒಳ್ಳೆಯ ಪ್ರಯತ್ನ!
ನನಗೆ ತಿಳಿದ ಮಟ್ಟಿಗೆ ದುರ್ಗದ ಹುಡುಗರಲ್ಲಿ ಬಹುತೇಕರು ಈಗ ಪತ್ರಕರ್ತರಾಗಿ ಬೆಂಗಳೂರಿನಲ್ಲಿ ನೆಲೆಗೊಂಡಿದ್ದಾರೆ. ಆದರೂ ತಮ್ಮ ಊರಲ್ಲಿ ನಡೆಯಬೇಕಿರುವ ಸಾಹಿತ್ಯ ಸಮ್ಮೇಳನ ಕುರಿತು ಚರ್ಚೆ ನಡೆಸಲಿಕ್ಕೆ ಎಲ್ಲರೂ ಒಂದಾಗಿ ಬ್ಲಾಗ್ ಆರಂಭಿಸುವುದಿದೆಯಲ್ಲ... ಅದು ಗಮನಿಸಬೇಕಾದ್ದು. ನಿಮ್ಮ ಒಳಗೆ ಇರುವ ನಿಮ್ಮಊರಿನ ಬಗೆಗಿನ ಅಭಿಮಾನ ಗ್ರೇಟ್! ಆದರೆ ಇಲ್ಲಿ ಬ್ಲಾಗ್ ನಲ್ಲಿರುವ 'ಜಿಲ್ಲೆಯಲ್ಲಿ ಈಗ ಸಮ್ಮೇಳನದ ಸಂಚಲನ' ಬರಹ ಕುರಿತ ನನ್ನ ಅನಿಸಿಕೆ ಹಂಚಿಕೊಳ್ಳಲು ಬಯಸುತ್ತೇನೆ.
1. ಸಾಹಿತ್ಯ ಯಾರಪ್ಪನ ಮನೆ ಸೊತ್ತೂ ಅಲ್ಲ. ಸಾಹಿತ್ಯದ ಬಗ್ಗೆ ತಿಳಿಯದವರು, ಬರೆಯದವರು, ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂಬುದು ಕನ್ನಡಕ್ಕೆ ಮಾಡುವ ಮೊದಲ ದ್ರೋಹ.
2. ದುರ್ಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವಾಗ ಎಲ್ಲರೂ ಒಂದಾಗಿ ಕನ್ನಡದ ತೇರು ಎಳೆಯುವುದು ಬಿಟ್ಟು, ಅವರಿಗೆ ಬರೆಯೋಕೆ ಬರೋಲ್ಲ, ಇವರು ಇಂಥಹವರು, ಅವರುಒಪ್ಪಿಕೊಂಡು ಬಂದಿದ್ದಾರೆ, ಅವರೇ ಮಾಡಲಿ ಎಂದು ಯೂಸ್ಲೆಸ್ ಮಾತುಗಳನ್ನು ಹೇಳುವುದಿದೆಯಲ್ಲ, ಅದು ಕನ್ನಡಕ್ಕೆ ಮಾಡುವ ಎರಡನೇ ದ್ರೋಹ.
3. ಮೂರನೆಯದಾಗಿ ಗಣಿ ಧಣಿಗಳು ಪೂರ್ತಿ ಸಹಕಾರ ಕೊಡುವುದಿದ್ದರೆ ಅದನ್ನು ಖಂಡಿತಾ ಕನ್ನಡದ ಕೆಲಸಕ್ಕೆ ಬಳಸಿಕೊಳ್ಳಬೇಕು. ಕೇವಲ ಗಣಿಧಣಿಗಳು, ಶಾಸಕರನ್ನು ಖರೀದಿಸಿದರು, ಅಲ್ಲಿ ಹಾಗೆ ಅನ್ಯಾಯ ಮಾಡಿದರು, ಹೀಗೆ ಮಾಡಿದರು ಎಂದು ಹೀಗಳೆಯುವುದು ಕೇವಲ ಸಿನಿಕತನ. ಅವರಲ್ಲಿರುವ ಹಣ ಒಳ್ಳೆಯದಕ್ಕೆ, ಅದರಲ್ಲೂ ಕನ್ನಡದ ಕೆಲಸಕ್ಕೆ ಬಳಕೆಯಾಗುವುದಿದ್ದರೆ ಯಾಕೆ ಬೇಡ? ಸಮಾಜದಲ್ಲಿ ಹಣವುಳ್ಳವರು ಅನೇಕರಿದ್ದಾರೆ. ಅವರನ್ನು ಹಿಡಿದು ತಂದು ಇಂತಹ ಕೆಲಸಕ್ಕೆ, ಅವರನ್ನು ತೊಡಗಿಸುವುದು ನಿಜಕ್ಕೂ ಅರ್ಥಪೂರ್ಣ. ಇಂತಹ ಉತ್ತಮ ಕೆಲಸಕ್ಕೆಅಂಥಹವರನ್ನು ಎಳೆದು ತಂದು ಜೋಡಿಸದಿದ್ದರೆ, ಅವರು ಗಳಿಸಿದ ಹಣ ಸದ್ವಿನಿಯೋಗವಾಗುವುದಾದರೂ ಹೇಗೆ? ಗೋ ಅಹೆಡ್.
4. ಕೇವಲ ಸಾಹಿತ್ಯ ಬರೆಯುವವರಿಂದಲೇ ಸಮ್ಮೇಳನ ನಡೆಸಲು ಆಗುವುದಿಲ್ಲ. ಅದಕ್ಕೆ ಸಂಘಟಕರು ಬೇಕು. ವಿವಿಧ ರೀತಿಯ ಜನರನ್ನು ಒಗ್ಗೂಡಿಸಿ, ಅವರಿಂದ ಕೆಲಸ ತೆಗೆಸುವ ಕಲೆಗೊತ್ತಿರಬೇಕು. ಅಂತಹ ಸಂಘಟನಾ ಚಾತುರ್ಯ ಇದ್ದರೆ ಅನಕ್ಷರಸ್ಥ ಕೂಲಿ ಕೆಲಸದವನನ್ನು ಬಳಸಿದರೂ ನಾನು ಬೇಡ ಅನ್ನುವುದಿಲ್ಲ. ಅಂತಾದ್ದರಲ್ಲಿ ಒಂದು ಕ್ಷೇತ್ರದ ಶಾಸಕರಾದ ಬಸವರಾಜನ್ ಏಕೆ ಬೇಡ? ಅವರ ಇತರೆ ಅಂಶಗಳು ನಮಗೆ ಬೇಕಿಲ್ಲ. ಆದರೆ ಅವರ ಚಾತುರ್ಯ ಏಕೆ ಬಳಸಬಾರದು?? ಮೇಲಾಗಿ ಅವರಿಗೆ ಜನರು ನೀಡಿದ ಅಧಿಕಾರವಿದೆ. ಅವರು ಬೇಡ ಎನ್ನುವ ಹಕ್ಕುಯಾರಿಗೂ ಇಲ್ಲ.
5. ಕೇವಲ ಸಾಹಿತ್ಯವನ್ನೇ ಬರೆದುಕೊಂಡಿರುವ ಸಾತ್ವಿಕ ಸ್ವಭಾವದ ಸಾಹಿತಿಗಳನ್ನುಕಟ್ಟಿಕೊಂಡು ಸಾಹಿತ್ಯ ಸಮ್ಮೇಳನ ನಡೆಸುವುದು ಸಾಧ್ಯವೇ? ಸಾಹಿತಿಗಳಿಗೆ ಬರೆಯುವ ಕೆಲಸ. ಅವರದ್ದು ಸಂಕೋಚದ ಮನಸ್ಸು. ಯಾರ ಮುಂದೂ ಕೈಯೊಡ್ಡಲಾರದ ಸ್ವಾಭಿಮಾನ. ಅವರದ್ದೇನಿದ್ದರೂ, ಶಾಂತ ಸಾಹಿತ್ಯದ ಕೆಲಸ. ಆದರೆ ಅದನ್ನು ಜನರ ಬಳಿಗೆ ತಲುಪಿಸಲು ನೂರಾರು ಜನ ಸಾಹಿತ್ಯ ರಚಿಸಲಿಕ್ಕೆ ಬರದವರೂ ಕೈ ಜೋಡಿಸಬೇಕು. ಸಾಹಿತ್ಯ ಸಮ್ಮೇಳನದ ದಿನನೆರೆದ ಜನರಿಗೆ ಕಲ್ಲಂಗಡಿ ಹಣ್ಣು, ಸೌತೆಕಾಯಿ ಕುಯ್ದು ಕೊಡುವವ, ಮಂಡಕ್ಕಿ, ಮೆಣಸಿನಕಾಯಿ ತಯಾರಿಸಿ ಕೊಡುವವರದ್ದೂ ಸಹ ಸಾಹಿತ್ಯದ ಸೇವೆ, ಕನ್ನಡಮ್ಮನ ಸೇವೆ ಎಂಬುದು ನೆನಪಲ್ಲಿರಬೇಕು. ಎಲ್ಲರೂ ಸೇರಿಯೇ ಕೆಲಸವಾಗುವುದು.
6. ವೀರೇಶ್ ಅವರು ದುರ್ಗದ ಮೇಲಿನ ಅಭಿಮಾನಕ್ಕೆ, ಅದರಲ್ಲೂ 75 ನೇ ಸಾಹಿತ್ಯ ಸಮ್ಮೇಳನನಮ್ಮ ಊರಿನಲ್ಲೇ ಆಗಬೇಕು ಎಂದು ಬಯಸಿ ಒಪ್ಪಿ ಬಂದಿರುವಾಗ, ಅದು ಅವರ ನಿರ್ಧಾರ. ಒಪ್ಪಿಕೊಂಡು ಬಂದಿರುವ ಅವರೇ ಸಮ್ಮೇಳನ ಮಾಡಿಕೊಳ್ಳಲಿ ಎಂಬ ಧೋರಣೆ ಅಕ್ಷಮ್ಯ ಅಪರಾಧ.ಇದಕ್ಕಿಂತ ದೊಡ್ಡ ದ್ರೋಹ ಬೇರೊಂದಿಲ್ಲ. ವೀರೇಶ್ ಅವರ ಕಳಕಳಿ ಎಲ್ಲರೂ ಗಮನಿಸಬೇಕು.ಅವರ ಕಳಕಳಿಗೆ ಎಲ್ಲಾ ದುರ್ಗದ ಜನರೂ ಕೈ ಜೋಡಿಸಬೇಕು. ಕನ್ನಡ ಸಾಹಿತ್ಯ ಲೋಕದಲ್ಲಿಮೈಲುಗಲ್ಲಾಗಿರುವ 75 ನೇ ಸಮ್ಮೇಳನವನ್ನು ದುರ್ಗದಲ್ಲಿ ನಡೆಸಲು ಒಂದಾಗಿ ನಿಲ್ಲಬೇಕು.ಇಂತಹ ಅವಕಾಶ ಎಲ್ಲರಿಗೂ, ಯಾವಾಗಲೂ ಸಿಗದು ಎಂಬುದು ಗಮನದಲ್ಲಿರಲಿ.
7. ಇಂತಹ ಅಡ್ಡದಾರಿಯಲ್ಲಿ ಯೋಚಿಸುವನ್ನು ಬಿಟ್ಟು ದುಗದ ಜನ ಯಾವುದೇ ಕಾರಣಕ್ಕೂ 75 ನೇಸಮ್ಮೇಳನ ತಮ್ಮ ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಇಂದಿನ ರಾಜಕೀಯಪರಿಸ್ಥಿತಿಯಲ್ಲಿ ದುರ್ಗದ ಜನರ ನಿರ್ಲಕ್ಷ, ಒಡಕುತನ, ಆರೋಪ-ಪ್ರತ್ಯಾರೋಪ ನೋಡಿ, ಇವರಿಂದ ಏನೂ ಆಗೋಲ್ಲ ಎಂದು ಬೇರೆ ಜಿಲ್ಲೆಗೆ ಇದರ ಅವಕಾಶ ಜಾರದಿರಲಿ. ದುರ್ಗದ ಹುಡುಗರು ಹೇಳಿರುವಂತೆ ಇನ್ನಾದರೂ ಈ ಬಗ್ಗೆ ಪಾಸಿಟಿವ್ ಆಗಿ ಜನರು ಚಿಂತಿಸಲಿ. ದುರ್ಗದ ಜನರು ಒಂದಾಗಿ 75 ನೇ ಸಮ್ಮಳನದ ಬಗ್ಗೆ ಸಂಘಟಿತ ಪ್ರಯತ್ನ ಆರಂಭವಾಗಲಿ. ಜೈ ಕನ್ನಡ

1 comment:

ಪುನಹ said...

nija svami, knnadad teru eleyalu jati,math, badav ballid emba sankalegalirabaradu. hagiddaga matra e jatregondu atrh bandeetu. matteke anuman, elli omme kai kowi nodon...