Thursday, January 22, 2009

ಊಟದ ಮೆನು, ನಕ್ಷೆ.... ಒಳಗೊಂಡ ಮಾಹಿತಿ ಕೈಪಿಡಿ

ಚಿತ್ರದುರ್ಗ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ 6 ದಿನ ಮಾತ್ರ ಬಾಕಿ ಇದೆ. ಉಳಿದಿದ್ದು ಒಂದು ಕಡೆ ಸಮ್ಮೇಳನದ ಸಿದ್ಧತೆಗಳು ಮುಕ್ತಾಯದ ಹಂತ ತಲುಪಿದ್ದರೆ ಮತ್ತೊಂದು ಕಡೆ ಹೊಸ ಆಲೋಚನಗಳ ಅನುಷ್ಠಾನ ಮಾಡುವ ಕೆಲಸ ಆರಂಭವಾಗಿದೆ.ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಅತಿಥಿಗಳಿಗೆ ಈ ಕೈಪಿಡಿ ಸಿದ್ಧವಾಗಿದೆ. ಸಮ್ಮೇಳನದಲ್ಲಿ ಯಾವ ದಿನ ಏನು ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ಏನು ? ಯಾವ ಜಿಲ್ಲೆಯವರಿಗೆ ಎಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ ? ಯಾವ ಬಸ್ಸಿನಲ್ಲಿ ಅವರು ಪ್ರಧಾನ ಹಾಗೂ ಸಮಾನಾಂತರ ವೇದಿಕೆಗೆ ಆಗಮಿಸಬೇಕು, ಪ್ರಮುಖ ಪ್ರವಾಸಿ ತಾಣಗಳು ಯಾವುವು ? ಅಲ್ಲಿಗೆ ಹೋಗಲು ಕಲ್ಪಿಸಲಾದ ಸೌಲಭ್ಯಗಳು ಏನು ? ಎಂಬಿತ್ಯಾದಿ ವಿವರಗಳುಳ್ಳ ಮಾಹಿತಿ ಕೈಪಿಡಿ ಇದು. ಊಟದ ಮೆನು ಪ್ರತಿನಿಧಿಗಳಿಗೆ ನೀಡಲಾಗುವ ಕಿಟ್‌ನಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿದೆ. ನಕ್ಷೆಯನ್ನೊಳಗೊಂಡ ಈ ಮಾಹಿತಿ ಕೈಪಿಡಿಯನ್ನು ವಿಶೇಷವಾಗಿ ಮುದ್ರಿಸಲಾಗಿದೆ.

No comments: