Tuesday, June 10, 2008

ಚುನಾವಣೆ ಮುಗಿದಿದೆ.. ಚುನಾವಣೆ ಬಾಕಿ ಇದೆ....

ದೊಡ್ಡ ತಲೆ ಭಾರ ಇಳಿದೆ. ಆದರೆ ಚಿತ್ರದುರ್ಗದ ಮಟ್ಟಿಗೆ ಸಾಹಿತ್ಯ ಸಮ್ಮೇಳನ.. ದೊಡ್ಡ ಕನಸಿನ ಭಾರವಿದೆ. ಅದನ್ನು ಯಶಸ್ವಿಯಾಗಿ ಹೊತ್ತೊಯ್ಯುವುದಕ್ಕೆ ಇನ್ನು ಮೇಲೆ ಸಿದ್ಧತೆಗಳು ಆರಂಭವಾಗಬೇಕು.
ಮೇ ಅಂತ್ಯಕ್ಕೆ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಬಹುಶಃ ಇನ್ನೊಂದು ತಿಂಗಳಲ್ಲಿ ನಡೆಯಬಹುದು. ಹಾಗಾದರೂ ಚಿತ್ರದುರ್ಗದಲ್ಲಿ ಸಮ್ಮೇಳನ ನಡೆಯುತ್ತದಾ?
ಯಾಕೋ ಇದೊಂದು ಅನುಮಾನ ಕಾಡುತ್ತಿದೆ. ಗಣಿ ಧಣಿ, ರೆಡ್ಡಿ ಸಹೋದರ ಕರುಣಾಕರ ರೆಡ್ಡಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವುದು ಸಮ್ಮೇಳನಕ್ಕೆ ಹಣದ ಕೊರತೆಯ ಮಾತಿಲ್ಲ. ಪ್ರಶ್ನೆ ಇರುವುದು ಒಗ್ಗಟ್ಟಿನದು.... ಚಿತ್ರದುರ್ಗದ ಕ್ಷೇತ್ರದ ಶಾಸಕ ಎಸ್.ಕೆ.ಬಸವರಾಜನ್, ಮುರುಘ ಶ್ರೀ, ಹಾಲಿ ಕಸಾಪ ಜಿಲ್ಲಾಧ್ಯಕ್ಷ ವೀರೇಶ್, ಜಿಲ್ಲೆಯ ಸಿರಿಗೆರೆ, ಹೊಸದುರ್ಗ, ಕಬೀರಾನಾಂದಾಶ್ರಮದ ಶ್ರೀಗಳು.. ಹೀಗೆ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಬೇಕಾದವರು ಒಗ್ಗಟ್ಟಾಗಿ ದುಡಿದರೆ ಸಮ್ಮೇಳನಕ್ಕೊಂದು ಕಳೆ ಎನ್ನುವುದು ಜಿಲ್ಲೆಯ ಸಾಹಿತ್ಯಾಸಕ್ತರ ಅಭಿಮತ.
ಸದ್ಯದ ರಾಜಕೀಯ ಬೆಳವಣಿಗೆ ಜಿಲ್ಲೆಯ ಕೆಲ ಹಿರಿಯರಲ್ಲಿ ವೈಮನಸ್ಸು ಉಂಟು ಮಾಡಿವೆ ಎಂಬುದೇ ಈ ಗುಮಾನಿಯ ಮಾತುಗಳಿಗೆ ಕಾರಣ.
ಜಿಲ್ಲೆಯ ಬುದ್ದಿಜೀವಿಗಳು, ಸಾಹಿತ್ಯಾಸಕ್ತರು ಒಂದೆಡೆ ಇನ್ನಾದರೂ ಸಮ್ಮೇಳನದ ಕುರಿತು ನಾಲ್ಕು ಮಾತುಗಳನ್ನು ಆಡಿ ಎಲ್ಲರೂ ಕೈಜೋಡಿಸಲು ಪ್ರೇರೇಪಿಸುವ ಅಗತ್ಯವಿದೆ..

No comments: