Thursday, December 20, 2007

ನಮ್ಮ ಮೇಲೆ ಪ್ರೀತಿ, ಇರಲಿ ಸದಾ ಇದೇ ರೀತಿ


ಆತಂಕ ವ್ಯಕ್ತಪಡಿಸಿದ ಶಶಿ,
ಉತ್ಸಾಹದಿಂದ ಪ್ರತ್ರಿಕ್ರಿಯಿಸಿದ ಮಾಲಾ,
ಶಶಿಯ ಆತಂಕಕ್ಕೆ ಕಾರಣ ಹುಡುಕಿದ
ಗವಿಯಪ್ಪ ಗರುಡಾಪುರ,
ಮತ್ತೊಂದು ಆತಂಕವನ್ನು
ಎದುರಿಟ್ಟ ಕಿನ್ನಿದಾರು,
ಬೆನ್ನು ತಟ್ಟಿದ ಅಗ್ನಿಭೂತಿ,
ನಿಮಗೆಲ್ಲಾ ಈಗಲೇ ಥ್ಯಾಂಕ್ಸ್ ಹೇಳಿಬಿಡಬೇಕು ಎನ್ನುವಷ್ಟು ಸಂತೋಷವಾಗಿದೆ. ಹೇಳಿಬಿಟ್ಟರೆ? ಊಹೂಂ ನೀವಿನ್ನೂ ಈ ಬ್ಲಾಗ್ ನೋಡುತ್ತಿರಬೇಕು. ದುರ್ಗದವರೇ ಆದರೆ ನೀವೇ ಇಲ್ಲಿ ಬರೆಯಬೇಕು. ಇಂಥದ್ದೊಂದು ನಿರೀಕ್ಷೆಯನ್ನು ದುರ್ಗದ ಹುಡುಗರಾದ ನಾವು ಇಟ್ಟುಕೊಂಡಿದ್ದೇವೆ.
ಶಶಿ ಚಿತ್ರದುರ್ಗದವರೇ ಆದರೆ ಅವರ ‘ನಾವೂ ಬರುತ್ತೇವೆ ’ ಅನ್ನೋ ಮಾತನ್ನು ತಿದ್ದಬೇಕೆಂದುಕೊಳ್ಳುತ್ತೇನೆ. ನಾವು ಬರುವವರನ್ನು ಸ್ವಾಗತಿಸುವವರು. ಅದಕ್ಕೆ ಬೇಕಾದ ಸಿದ್ಧತೆ ಮಾಡಬೇಕಾದವರು. ನಾವೂ ಇರುತ್ತೇವೆ, ನೀವು ಬನ್ನಿ ಅಂದರೆ ಚೆನ್ನಾಗಿರುತ್ತೆ. ಏನಂತೀರಾ ಶಶಿ?
ಮಾಲಜಿ, ಚಿತ್ರ-ದುರ್ಗ ಅನ್ನೋ ಹೆಸರಿನ ನಿಮ್ಮ ಬ್ಲಾಗ್ ನೋಡಿ, ನೀವು ಚಿತ್ರದುರ್ಗದವರೇ ಅನ್ನೋ ಕಾರಣಕ್ಕೆ ಹಿಂದೂ ಮುಂದೂ ಏನು ಹೇಳದೆ, ಪ್ಲೀಸ್ ವಿಸಿಟ್ ಅಂತಾ ಒಂದೇ ರಿಕ್ವೆಸ್ಟ್ ಇಟ್ಟಿದ್ದೆವು. ನೀವು ನೋಡಿ ಮೆಚ್ಚಿದ್ದೀರ. ನೀವು ಚಿತ್ರದುರ್ಗದವರೇ ಆದರೆ, ನಿಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಿ. ನಮ್ಮ ಜೊತೆಗಿರಿ.
ತರಲೇಗೆ ಹೇಳಿದ್ದರೂ, ಲವಲವಿಕೆ ಮೂಡಿಸುವುದಕ್ಕೆ ಹೇಳಿದ ಮಾತು ಗವಿಯಪ್ಪನವರದು ಅಂತಾ ನಮ್ಮ ಭಾವನೆ. ಖುಷಿ ಆಗಿದೆ. ಅವರಿಗೆ ನಮ್ಮ ಸಮಾಧಾನ; ಎಂಥ ದಾಳಿಗೂ ಹೆದರದ ಏಳು ಸುತ್ತಿನ ಕೋಟೆಯ ಊರು ದುರ್ಗ. ಹಾಗಾಗಿ ನಮಗೆ ಯಾರ ಭಯವೂ ಇಲ್ಲ.
ಹುಲ್ಲು ಹುಟ್ಟದಿದ್ದರೇನಂತೆ ಕಿನ್ನಿದಾರು, ಹುಲ್ಲು ಹುಟ್ಟಿಸೇ ತೀರುತ್ತೇವೆ ಅನ್ನೋ ಛಲ ಬಿತ್ತುತ್ತಾರೆ ಸಾಹಿತಿಗಳು, ವಿಚಾರವಂತರು. ಹುಲ್ಲು ಬೆಳೆದೇ ಬೆಳೆಯುತ್ತೇವೆ ಅನ್ನೋ ಹಂಬಲ ತುಂಬುತ್ತಾರೆ. ಅಷ್ಟು ಸಾಕು ಸ್ವಾಮಿ. ಭದ್ರಾ ಮೇಲ್ದಂಡೆಗೆ ನಾವು ಇಷ್ಟೂ ದಿನ ಹೋರಾಡ್ತಾ ಇದ್ದೀವಿ. ಇದಕ್ಕಿಂತ ಬೇಕಾ? ಚಿತ್ರದುರ್ಗದ ಗತಿ ಓನ್ಲೀ ಪ್ರಗತಿ. ಓಕೆ.
ಅಗ್ನಿ ಭೂತಿ ಇಟ್ಟೀರಿ ನಮ್ಮ ಮೇಲೆ ಪ್ರೀತಿ ಸದಾ ಇದೇ ರೀತಿ.

1 comment:

Anonymous said...

tamma replyge thanks. nimma mele bharavase ide. ene agli... sali, peerbasha, ananda rigvedi antaha apayakari barahagararu urige bandage enadru agodu gyaranty. hagagi ondishtu echchara irali ashte nanna salahe