Monday, December 17, 2007

ಹೀಗೊಂದು ಸುದ್ದಿ ಬಂದಿದೆ..

ಚಿತ್ರದುರ್ಗದ ಸಮ್ಮೇಳನ ಅತ್ಯಂತ ವಿಶೇಷವಾದ ಸಮ್ಮೇಳನವಾಗುತ್ತದೆ ಎಂದು ಜಿಲ್ಲೆಯ ಲೇಖಕರು, ವಿಚಾರವಂತರು ಮಾತಾಡಿಕೊಳ್ಳಲಾರಂಭಿಸಿದ್ದಾರೆ. ಜಿಲ್ಲೆಯನ್ನು ಬಲ್ಲವರು ಮಾತು ಇದೆ. ಅದಕ್ಕೆ ಕಾರಣ ಶರಣಿರಿರುವ ಊರು. ಹಾಗಾಗಿ ಸಮ್ಮೇಳನ ಮಾದರಿ ಸಮ್ಮೇಳನವಾಗುತ್ತದೆ. ಅವಿಸ್ಮರಣೀಯವಾಗುತ್ತದೆ ಎಂಬ ಮಾತುಗಳು ಈಗಾಗಲೇ ವಿನಿಮಯವಾಗುತ್ತಿದೆ. ಆ ಮಟ್ಟಿನ ಶಕ್ತಿ ಅವರಿಗಿದೆ ಅನ್ನುವುದರಲ್ಲಿ ಸಂಶಯವೇ ಇಲ್ಲ. ನಮಗೂ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ಎಂದಾಗ ನೆನಪಾಗಿದ್ದು ಮೊದಲು ಶರಣರೇ. ಆದರೆ ಈಗ ಬಂದಿರುವ ಸುದ್ದಿ ದಿಗಿಲು ಹುಟ್ಟಿಸುವಂಥದ್ದು. "ಅವಿಸ್ಮರಣೀಯವಾಗಬೇಕಿರುವ ಸಮ್ಮೇಳನದ ಅಮೃತಮಹೋತ್ಸವ ಶರಣ ಸಂಸ್ಕೃತಿಯ ಜೊತೆಗೆ ನಡೆದು ಹೋಗುತ್ತದೆ".ಕೇಳಿದ ಮಾತು ಸುಳ್ಳಾಗಲಿ ಎಂದು ದುರ್ಗದ ಹುಡುಗರು ಪ್ರಾಥರ್ಿಸುತ್ತಿದ್ದೇವೆ. ಇದು ಶರಣರ ಯೋಚನೆಯಾಗಿರಲಿಕ್ಕಿಲ್ಲ ಎಂದು ಲೆಕ್ಕ ಹಾಕಿಕೊಳ್ಳುತ್ತಿದ್ದೇವೆ. ಬಹುಶಃ ಯಾರೂ ಇದನ್ನು ಹೈಜಾಕ್ ಮಾಡುವುದಿಲ್ಲ ಎಂದು ಭಾವಿಸಿರುತ್ತೇವೆ. ಆಶಿಸುತ್ತೇವೆ.

1 comment:

Anonymous said...

i don't think that sharanaru have an intention to hijack the mega event. kannada sahitya parishat would also not accept that. both are two different events and should be observed independentally.