Friday, December 28, 2007

ಶ್ರೀನಿವಾಸರಾಜು ಎಂಬ ಚಿರಂಜೀವಿ

ನದಿ ಬತ್ತಬಹುದು... ಅಂತರ್ಜಲ ಅಷ್ಟು ಸಲೀಸಾಗಿ ಬತ್ತುವುದಿಲ್ಲ!
ಮೇಷ್ಟ್ರು ಎಂದೇ ನಾಡಿನಾದ್ಯಂತ ಪರಿಚಿತರಾದ ಚಿ.ಶ್ರೀನಿವಾಸರಾಜು ಇನ್ನಿಲ್ಲ. ತೀರ್ಥಹಳ್ಳಿಯಲ್ಲಿ ಹೃದಯಾಘಾತದಿಂದ ಇಂದು ಮುಂಜಾನೆ ಅವರ ಜೀವ ಮುದುಡಿಕೊಂಡಿತು. ಅವರು ಬರೆದದಕ್ಕಿಂತ ಬರೆಸಿದ್ದು ಹೆಚ್ಚು. ಆ ಕಾರಣಕ್ಕೆ ಅವರು ಮೇಷ್ಟ್ರು. ತಮಗಿಂತ ಕಿರಿಯರು ಬರೆದದ್ದನ್ನು ಓದಿ, ಪ್ರೋತ್ಸಾಹದ ಮಾತುಗಳನ್ನಾಡಿ, ಪ್ರಕಟಣೆಗೆ ಸಹಾಯ ಮಾಡಿದರು. ಕವಿ ಜಿ.ಎಸ್. ಶಿವರುದ್ರಪ್ಪನವರ ಮಾತಿನಲ್ಲಿ ಹೇಳುವುದಾದರೆ ಅವರು ಅಂತರ್ಜಲದ ಹಾಗೆ. ಕನ್ನಡದ ಈ ಹೊತ್ತಿನ ಬಹುತೇಕ ಬರಹಗಾರರ ಹಿಂದಿನ ಸ್ಫೂತರ್ಿ ಸೆಲೆ ರಾಜು ಸರ್. ಇದೇ ವರ್ಷ ಅವರ ಹಿತೈಷಿಗಳು ಅವರಿಗೊಂದು ಅಭಿನಂದನಾ ಗ್ರಂಥ ಅಪರ್ಿಸಿದರು. ಕನರ್ಾಟಕ ಸಕರ್ಾರವೂ ಇದೇ ವರ್ಷ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ರಾಜು ಸರ್ ಹೆಸರಿಗೆ ಸಿನಾನಿಮಸ್ ಎಂಬಂತೆ ನೆನಪಾಗುವುದು ಕ್ರೈಸ್ಟ್ ಕಾಲೇಜು ಕನ್ನಡ ಸಂಘ. ಅಚ್ಚರಿಯ ಸಂಗತಿ ಎಂದರೆ ಭಾರತದ ಯಾವುದೇ ಕಾಲೇಜಿನ ಸಂಘ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಪ್ರಕಟ ಮಾಡಿರುವಷ್ಟು ಪುಸ್ತಕ ಪ್ರಕಟಿಸಿಲ್ಲ. ಯುಜಿಸಿಯೇ ಈ ಮಾತನ್ನು ಪುಷ್ಟೀಕರಿಸಿ ಕಾಲೇಜಿನ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಂಘದ ಹಿಂದಿನ ಸ್ಫೂತರ್ಿ ರಾಜು ಸರ್. ಪ್ರತಿವರ್ಷ ಹಲವಾರು ಸಾಹಿತ್ಯಕ ಸ್ಪಧರ್ೆಗಳನ್ನು ಏರ್ಪಡಿಸಿ ನೂರಾರು ಪ್ರತಿಭೆಗಳನ್ನು ಕನ್ನಡ ಬರಹ ಪ್ರಪಂಚಕ್ಕೆ ಪರಿಚಯಿಸಿದರು. ಹಾಗೇ ಬರಹಗಾರರಾದವರೆಲ್ಲರಿಗೂ ಅವರು `ರಾಜು ಸರ್' ಆದರು. ಅವರಿಂದ ಬೆಳಕಿಗೆ ಬಂದ ಪ್ರತಿಭೆಗಳ ಸಂಖ್ಯೆ ದೊಡ್ಡದು.ಅವರು ಮೂಕ ನಾಟಕಗಳನ್ನು ಬರೆದರು. ಅವರ ಮಗ ಪತ್ರಕರ್ತ ಸುಗತ ಶ್ರೀನಿವಾಸರಾಜು ಅದೇ ನಾಟಕಗಳನ್ನು ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಅನುವಾದಿತ ಕೃತಿಗೆ ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.ಅವರು ಇನ್ನಿಲ್ಲ. ಆದರೂ ಚಿಕ್ಕಬಳ್ಳಾಪುರದ ಶ್ರೀನಿವಾಸರಾಜು ಚಿರಂಜೀವಿ! ನದಿ ಬತ್ತಬಹುದು... ಅಂತರ್ಜಲ ಅಷ್ಟು ಸಲೀಸಾಗಿ ಬತ್ತುವುದಿಲ್ಲ

No comments: